ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಕಟೀಲಿನಲ್ಲಿ ಮಕ್ಕಳಾಟದ ಕಲಾ ಪರ್ವ

ಲೇಖಕರು : ವಾಮನ ಕರ್ಕೇರ ಕೊಲ್ಲೂರು
ಶನಿವಾರ, ಒಕ್ಟೋಬರ್ 19 , 2013
ಭಳಿರೇ..ಶಹಬ್ಬಾಸ್...ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದ ಬಾಲ ಕಲಾವಿದರು ಮೇಳದ ಪಂಚಮ ವರ್ಷದ ಕಲಾ ಪರ್ವದಲ್ಲಿ ಮಹತ್ವದ ದಾಖಲೆಯೊಂದನ್ನು ಬರೆಯಿಸಿದ್ದಾರೆ. ಅ. 20ರಂದು ಕಟೀಲು ದೇವಳದ ರಥಬೀದಿಯಲ್ಲಿ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದವರು ಪ್ರಸ್ತುತ ಪಡಿಸುವ 'ಪಂಚವಟಿ' ಮೇಳದ ನೂರನೇ ಪ್ರದರ್ಶನವಾಗಿ ಮೂಡಿ ಬರಲಿದೆ.

ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳಕ್ಕೆ 5 ವರ್ಷಗಳಲ್ಲಿ ದಾಖಲಾದ ಒಟ್ಟು ವಿದ್ಯಾರ್ಥಿಗಳು 139. ಅವರಲ್ಲಿ ಹುಡುಗಿಯರು 112, ಹುಡುಗರು 29. ಸಂಖ್ಯಾ ಬಲದಲ್ಲಿ ಹುಡುಗಿಯರು ಶತಕ ದಾಟಿದ್ದಾರೆ. ಮೇಳದಲ್ಲಿ ಹಾಗೂ ತರಬೇತಿ ತರಗತಿಗಳಲ್ಲಿರುವವರು 5ರಿಂದ 10ನೇ ತರಗತಿ ವರೆಗೆ ಶಾಲೆ ಕಲಿಯುವ ಮಕ್ಕಳು. ವರ್ಷಂಪ್ರತಿ ಉಚಿತ ಪ್ರವಾಸ, ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಮೂಲಕ ಉತ್ತೇಜನ ನೀಡಲಾಗುತ್ತದೆ. ಮೇಳದಲ್ಲಿ ಮತ್ತು ತರಗತಿಗ ಳಲ್ಲಿ ಕೇವಲ ಕಟೀಲು ಶಾಲೆಗಳ ಮಕ್ಕಳು ಮಾತ್ರವಲ್ಲದೆ ಅವಿಭಜಿತ ದ.ಕ, ಉಡುಪಿ ಜಿಲ್ಲೆಗಳ ನಾನಾ ಕಡೆಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ.

ಶಿಬಿರ, ತರಬೇತಿಗಳು: ದುರ್ಗಾ ಮಕ್ಕಳ ಮೇಳದ ಸಮಸ್ತ ಸದಸ್ಯರಿಗೆ ದಿವಾಣ ಶಿವಶಂಕರ ಭಟ್ ಇವರಿಂದ ಮುಖವರ್ಣಿಕೆ ತರಬೇತಿ ಶಿಬಿರ, ಕೆ.ಗೋವಿಂದ ಭಟ್ ಇವರಿಂದ ವಿಶೇಷ ನಾಟ್ಯ ತರಗತಿಗಳನ್ನು ನಡೆಸಲಾಗಿದೆ. ಯಕ್ಷಗಾನಕ್ಕೆ ಸಂಬಂಧಿಸಿ ಟೈಲರಿಂಗ್ ಹಾಗೂ ಮಣಿಸರ ಪೋಷಾಕು ತಯಾರಿ ತರಗತಿ ನಡೆಸುವ ಯೋಜನೆ ಇದ್ದು, ಮಕ್ಕಳಿಗೆ ಭೋದಿಸುವ ಸಮರ್ಥ ಸಂಪನ್ಮೂಲ ವ್ಯಕ್ತಿಗಳಿಗಾಗಿ ಶೋಧಿಸಲಾಗುತ್ತಿದೆ. ಪ್ರತಿ ಶನಿವಾರ ಮಧ್ಯಾಹ್ನ ಚೆಂಡೆ ಮದ್ದಳೆ ತರಗತಿ ಗುರುಗಳು ಹರಿನಾರಾಯಣ ಬೆಪಡಿತ್ತಾಯ, ಪ್ರತೀ ಭಾನುವಾರ ಬೆಳಿಗ್ಗೆ ಭಾಗವತಿಕೆ ತರಗತಿ ಗುರುಗಳು ಬಲಿಪ ಶಿವಶಂಕರ ಭಟ್, ಪ್ರತಿ ಭಾನುವಾರ ಮಧ್ಯಾಹ್ನ ನಾಟ್ಯ ತರಗತಿ ಗುರುಗಳು ರಾಜೇಶ್ ಐ., ಭಾನುವಾರ ಸಂಜೆ 4 ಗಂಟೆ ಬಳಿಕ ವಿಶೇಷ ಹಿರಿಯ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿ ವ್ಯವಸ್ಥೆಗೊಳಿಸಲಾಗುತ್ತದೆ.

ಕೆರೆಮನೆ ರಾಷ್ಟ್ರೀಯ ನಾಟ್ಯೋತ್ಸವ, ಸ್ವರ್ಣದಲ್ಲಿ ಮುದ್ರಾನು ಸಂಧಾನ ಕಾರ್ಯಾಗಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಾಗಾರಗಳು, ಯಕ್ಷಗಾನ ಬಯಲಾಟ ಅಕಾಡೆಮಿಯ ಕಾರ್ಯಾಗಾರಗಳಲ್ಲಿ ವಿಶೇಷ ಸಂಪನ್ಮೂಲ ತಂಡವಾಗಿ ಕಟೀಲು ಶ್ರೀದುರ್ಗಾ ಮಕ್ಕಳ ಮೇಳದ ಕಲಾವಿದರ ಪ್ರಾತ್ಯಕ್ಷಿಕೆ ಅದ್ಭುತ ಪ್ರಶಂಸೆಗೆ ಪಾತ್ರವಾಗಿತ್ತು. ಅಲ್ಲದೇ ಬಜಪೆಯಲ್ಲಿ ಜರುಗಿದ ಶ್ರೀದೇವೀ ಮಹಾತ್ಮೆ ಮೂರು ದಿನಗಳ ಕಾರ್ಯಾಗಾರ ಕಟೀಲಿನಲ್ಲಿ ಜರುಗಿದ ಹಿಮ್ಮೇಳ ಪ್ರಸಂಗ ಪ್ರಸ್ತುತಿ ಅಧ್ಯಯನ ಶಿಬಿರಗಳ ಸಹಭಾಗಿತ್ವ ವಹಿಸಿತ್ತು.

ಪ್ರದರ್ಶಿತ ಪ್ರಸಂಗಗಳು: ಶ್ರೀಕೃಷ್ಣಲೀಲೆ ಕಂಸವಧೆ, ಇಂದ್ರಜಿತು ಕಾಳಗ, ವೀರಮಣಿ ಕಾಳಗ, ಸುದರ್ಶನ ವಿಜಯ, ನರಕಾಸುರ ಮೋಕ್ಷ, ವೀರ ಬಬ್ರುವಾಹನ, ಮಹಿಷ ಮರ್ದಿನೀ ಮಾಯಾ ತಿಲೋತ್ತಮೆ, ಜಾಂಬವತಿ ಕಲ್ಯಾಣ, ಗರುಡ ಗರ್ವಭಂಗ, ಪಾಂಚಜನ್ಯ, ಕೃಷ್ಣಾರ್ಜುನ ಕಾಳಗ, ಕುಶ-ಲವ, ಪಂಚವಟಿ, ಶ್ರೀ ದೇವೀ ಕೌಶಿಕೆ ಮಹಾತ್ಮೆ.

ಮೇಳದ ನಿರ್ವಹಣೆ: ದೇವಳದ ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ ಅವರು ಮೇಳದ ಅಧ್ಯಕ್ಷರಾಗಿ ಸಮಗ್ರ ನಿರ್ವಹಣೆ. ಇವರಿಗೆ ಕಾರ್ಯದರ್ಶಿ ವಾಸುದೇವ ಶೆಣೈ ಅವರ ಪೂರ್ಣ ಪ್ರಮಾಣದ ತೊಡಗಿಸಿಕೊಳ್ಳುವಿಕೆ. ಹೊರಗಡೆ ಪ್ರದರ್ಶನಗಳಲ್ಲಿ ಟ್ರಸ್ಟಿಗಳಾದ ದಯಾನಂದ ಮಾಡ, ರಾಜೇಶ್ ಐ, ಕೃಷ್ಣ ಕೆ. ಅವರ ಜತೆ ಮೇಳದಲ್ಲಿ ಹೆಣ್ಣು ಮಕ್ಕಳು ಹೆಚ್ಚಾಗಿರುವುದರಿಂದ ಜವಾಬ್ದಾರಿ ನಿರ್ವಹಣೆಗೆ ಕಟೀಲು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ವೈ ಮಾಲತಿ, ಶ್ವೇತಾ ಮಾಡ, ಸರೋಜಿನಿ ಅವರು ಸ್ವಯಂ ಪ್ರೇರಣೆಯ ಸಹಕಾರ ನೀಡುತ್ತಾರೆ. ಮಕ್ಕಳ ಶಾಲಾ ಪರೀಕ್ಷಾ ಪೂರ್ವ ಹಾಗೂ ಪರೀಕ್ಷಾ ಅವಧಿಯಲ್ಲಿ ಯಕ್ಷಗಾನ ಪ್ರದರ್ಶನ ಹಾಗೂ ತರಬೇತಿ ತರಗತಿಗಳಿಗೆ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮಕ್ಕಳ ಆರೋಗ್ಯದ ಹಿತದಷ್ಟಿಯಿಂದಲೂ ವಿಶೆೇಷ ಕಾಳಜಿ ವಹಿಸಲಾಗುತ್ತದೆ. ಮುಂಬಯಿ, ಬೆಂಗಳೂರು, ಅವಿಭಜಿತ ದ.ಕ-ಉಡುಪಿ ಜಿಲ್ಲೆಗಳಲ್ಲಿ ಯಕ್ಷ ಪರ್ಯಟಣೆಗೆದು ಈವರೆಗೂ 99 ಪ್ರದರ್ಶನಗಳನ್ನು ನೀಡಿದ್ದಾರೆ. ಅ.20ರಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ರಥಬೀದಿಯಲ್ಲಿ ಮೇಳದ ಕಲಾ ಪರ್ವದ ಸಮಾರೋಪ ಸಮಾರಂಭ ಬಳಿಕ ಪ್ರದರ್ಶನಗೊಳ್ಳುವ ಪಂಚವಟಿ ದುರ್ಗಾ ಮಕ್ಕಳ ಮೇಳದ ಶತಕದ ಪ್ರದರ್ಶನವಾಗಿದ್ದು , ಬಾಲ ಕಲಾವಿದರಿಗೆ ಉಜ್ವಲ ಭವಿಷ್ಯವನ್ನು ಸಾಕ್ಷಿಕರಿಸಲಿದೆ.



ಕೃಪೆ : http://www.vijaykarnataka.indiatimes.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ